ಮಂಗಳೂರು: ವ್ಯಕ್ತಿಯನ್ನು ಅಪಹರಿಸಲು ಯತ್ನ ಪ್ರಕರಣ; ಇಬ್ಬರು ಆರೋಪಿಗಳ ಬಂಧನ
ಮಂಗಳೂರು: ನಗರದ ಕದ್ರಿ ಕಂಬಳ ನಿವಾಸಿಯೊಬ್ಬರನ್ನು ಅಪಹರಿಸಲು ವಿದೇಶದಲ್ಲಿರುವ ವ್ಯಕ್ತಿಯೊಬ್ಬರು ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕದ್ರಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಪಾಣೆಮಂಗಳೂರು ನಿವಾಸಿಗಳಾದ ಪ್ರಜ್ವಲ್ ಮತ್ತು ಅಕ್ಷಯ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಕದ್ರಿಯ ವ್ಯಕ್ತಿ ವಿದೇಶದಲ್ಲಿರುವ ವ್ಯಕ್ತಿಯ ಬಳಿ 18 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು. ಅದರಲ್ಲಿ 12.5 ಲಕ್ಷ ರೂ. ಸಾಲ ಮರುಪಾವತಿ ಮಾಡಿದ್ದು, ಉಳಿದ ಹಣ ನೀಡಲು ಬಾಕಿಯಿತ್ತು. ಈ ವಿಚಾರದಲ್ಲಿ ವಿದೇಶದಲ್ಲಿದ್ದ ವ್ಯಕ್ತಿ ಆರೋಪಿಗಳಿಗೆ ಸಾಲ ಬಾಕಿಯಿದ್ದ ವ್ಯಕ್ತಿಯನ್ನು ಅಪಹರಿಸಲು ಸುಪಾರಿ ನೀಡಿದ್ದಾನೆ ಎನ್ನಲಾಗಿದೆ. ಅದರಂತೆ ಅಪಹರಣಕ್ಕೆ ಯತ್ನಿಸಿದಾಗ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.
ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story